ಕರ್ತವ್ಯದ ಕಹಳೆ

ಮೂಡಿದೆ ಕಹಳೆ ಭ್ರಷ್ಟ ರಾಜಕಾರಣದ ವಿರುದ್ಧ

ಬನ್ನಿ ತೊಲಗಿಸಲು ಆಗೋಣ ಸಿದ್ಧ

ಮಾಡದಿರಿ ಪಕ್ಷ-ಜಾತಿಯ ಭೇದ

ಕರ್ತವ್ಯ ಅರಿತು ದೇಶದ ಒಳಿತಿಗೆ ಆಗಿರಿ ಬದ್ಧ

ಒಳಿತು ಮಾಡದಾಗದ್ದಿದರು ಬಯಸಬೇಡಿ ಕೆಡಕು

ದುರ್ಬಳಕೆಗಲ್ಲ ನಮಗಿರುವುದು ಈ ಬದುಕು

ನಮ್ಮ ಮಧ್ಯೆ ಯಾಕೆ ನೂರೊಂದು ಬಿರುಕು

ದೇವರು ಅರಿಯನು ಇದು ಯಾವ ಸೋಂಕು!

ಚರಿತ್ರೆಯ ಪುಟದಲ್ಲಿವೆ ಸಾವಿರಾರು ತ್ಯಾಗ-ಬಲಿದಾನ

ಉಳಿಸಲು ಈ ಪುಣ್ಯ ಭೂಮಿಯ ಮಾನ

ಉರಳಿದರು ವರ್ಷಗಳು ಮರಳುತ್ತಲೆ ಇವೆ ಆ ದಿನ

ಬೇಡುತ್ತಿದೆ ಇನ್ನೆಷ್ಟು ಮಹಾತ್ಮರ ಜೀವಾನ?

ಯಾರಿಗೆ ಬೇಡ ಸಂಪತ್ತು-ಸಿರಿ

ಹಾಗಂತ ದೇಶವನ್ನು ಲೂಟುವುದಲ್ಲ ಸರಿ

ಮುಂದಿನ ಪೀಳಿಗೆಗೆ ಆಗೋಣ ಮಾದರಿ

ಅದುವೇ ಇರಲಿ ನಮ್ಮೆಲ್ಲರ ಗುರಿ